ಜೈನ ಮಹಾಪುರಾಣದಲ್ಲಿನ ಕಾಲಗಣನೆ
ಮುಖ್ಯಕಾಲವನ್ನು ಆಶ್ರಯಿಸಿರುವ ವ್ಯವಹಾರಕಾಲವು ಮುಖ್ಯಕಾಲದಿಂದ ಬೇರೆಯಾದುದು.
ವ್ಯವಹಾರ ಕಾಲವು ಪದಾರ್ಥಗಳಲ್ಲಾಗುವ ಹಳೆಯದು-ಹೊಸದೆಂಬ ಪರ್ಯಾಯಗಳನ್ನು
ಸೂಚಿಸುವುದು.
ವ್ಯವಹಾರ ಕಾಲವು ಪದಾರ್ಥಗಳಲ್ಲಾಗುವ ಹಳೆಯದು-ಹೊಸದೆಂಬ ಪರ್ಯಾಯಗಳನ್ನು
ಸೂಚಿಸುವುದು.
ವರ್ತನೆಯೇ ಲಕ್ಷಣವಾಗುಳ್ಳ ಮುಖ್ಯಕಾಲದಿಂದ ಪರಿವರ್ತನೆಯಾದ ಭೂತ-ಭವಿಷ್ಯತ್-
ವರ್ತಮಾನರೂಪವಾದ ಕಾಲವು ವ್ಯವಹಾರಕ್ಕೆ ಸಮರ್ಥವಾಗುತ್ತದೆ.
ವರ್ತಮಾನರೂಪವಾದ ಕಾಲವು ವ್ಯವಹಾರಕ್ಕೆ ಸಮರ್ಥವಾಗುತ್ತದೆ.
ವ್ಯವಹಾರಕಾಲದ ಭೇದಗಳೆಂದರೆ - ಸಮಯ, ಆವಲಿಕಾ, ಉಚ್ಚ್ವಾಸ, ಘಳಿಗೆ.
ಸೂರ್ಯಾದಿಜ್ಯೋತಿಶ್ಚಕ್ರದ ಪರಿಭ್ರಮಣೆಯಿಂದ ಈ ಭೇದಗಳು ಉಂಟಾಗುವುದು. ಇದನ್ನೇ
ಕಾಲಚಕ್ರವೆಂದು ಕರೆಯುತ್ತಾರೆ.
ಸೂರ್ಯಾದಿಜ್ಯೋತಿಶ್ಚಕ್ರದ ಪರಿಭ್ರಮಣೆಯಿಂದ ಈ ಭೇದಗಳು ಉಂಟಾಗುವುದು. ಇದನ್ನೇ
ಕಾಲಚಕ್ರವೆಂದು ಕರೆಯುತ್ತಾರೆ.
ವ್ಯವಹಾರ ಕಾಲದಲ್ಲಿ ಭವಸ್ಥಿತಿ, ಆಯುಃಸ್ಥಿತಿ, ಕಾಯಸ್ಥಿತಿ, ಕರ್ಮಸ್ಥಿತಿಗಳೆಲ್ಲವೂ ಸೇರಿಕೊಂಡು
ಅನಂತ ಸಮಯ ಉಳ್ಳದ್ದಾಗುವುದು. ಈ ಕಾಲದ ಪರಿವರ್ತನೆಯೂ ಕೂಡ ಅನಂತ
ಪ್ರಕಾರವಾದದ್ದು.
ಅನಂತ ಸಮಯ ಉಳ್ಳದ್ದಾಗುವುದು. ಈ ಕಾಲದ ಪರಿವರ್ತನೆಯೂ ಕೂಡ ಅನಂತ
ಪ್ರಕಾರವಾದದ್ದು.
ವ್ಯವಹಾರ ಕಾಲವನ್ನು ಉತ್ಸರ್ಪಿಣೀಭೇದ, ಅವಸರ್ಪಿಣೀಭೇದ ಎಂಬ ಭೇದಗಳಿರುವುದು.
ಉತ್ಸರ್ಪಿಣೀ ಕಾಲದಲ್ಲಿ ಮಾನವನ ಶಕ್ತಿ, ಆಯುಸ್ಸು, ಶರೀರಪ್ರಮಾಣಗಳು ವೃದ್ಧಿಯಾಗುವುದು.
ಅವಸರ್ಪಿಣೀ ಕಾಲದಲ್ಲಿ ಇವೆಲ್ಲವೂ ಕಡಿಮೆಯಾಗುವುದು.
ಉತ್ಸರ್ಪಿಣೀ ಕಾಲವು ಹತ್ತುಕೋಟಿ ಕೋಟಿ ಸಾಗರ ಪರಿಮಿತವಾದುದು. ಹಾಗೇ ಅವಸರ್ಪಿಣೀ
ಕಾಲವೂ ಅಷ್ಟೇ ಕಾಲ ಪರಿಮಿತವಾದುದು. ಇವೆರಡೂ ಸೇರಿ ಇಪ್ಪತ್ತು ಕೋಟಿ ಕೋಟಿ ಸಾಗರ
ಕಾಲವಾಗಿ ಇದನ್ನು ಕಲ್ಪವೆನ್ನುವರು.
ಕಾಲವೂ ಅಷ್ಟೇ ಕಾಲ ಪರಿಮಿತವಾದುದು. ಇವೆರಡೂ ಸೇರಿ ಇಪ್ಪತ್ತು ಕೋಟಿ ಕೋಟಿ ಸಾಗರ
ಕಾಲವಾಗಿ ಇದನ್ನು ಕಲ್ಪವೆನ್ನುವರು.
ಇವೆರಡೂ ಕಾಲಗಳನ್ನು ಆರು ಭೇದಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ :
ಅವಸರ್ಪಿಣೀಭೇದಕಾಲ - ಸುಷಮಸುಷಮಾ, ಸುಷಮಾ, ಸುಷಮದುಃಷಮಾ,
ದುಃಷಮಸುಷಮಾ, ದುಃಷಮಾ, ಅತಿದುಃಷಮಾ.
ದುಃಷಮಸುಷಮಾ, ದುಃಷಮಾ, ಅತಿದುಃಷಮಾ.
ಉತ್ಸರ್ಪಿಣೀಭೇದಕಾಲ - ಅತಿದುಃಷಮಾ, ದುಃಷಮಾ, ದುಃಷಮಸುಷಮಾ,
ಸುಷಮದುಃಷಮಾ, ಸುಷಮಾ, ಸುಷಮಸುಷಮಾ.
ಸುಷಮದುಃಷಮಾ, ಸುಷಮಾ, ಸುಷಮಸುಷಮಾ.
ಮೇಲೆ ವಿವರಿಸಿದ ಕಾಲವಿಭಾಗವನ್ನು ಸಮಾ ಎನ್ನುವರು. ಕಾಲವಿಭಾಗದಲ್ಲಿನ "ಸು"
ಅಕ್ಷರವು ಶ್ರೇಷ್ಟಾರ್ಥ ಸೂಚಿಯಾದರೆ "ದುಃ" ಅಕ್ಷರವು ಹೀನಾರ್ಥವನ್ನು ಸೂಚಿಸುತ್ತದೆ.
ಹೀಗಾಗಿ ಸುಷಮಾ ಎಂದರೆ ಉತ್ತಮಕಾಲ ಹಾಗೂ ದುಃಷಮಾ ಎಂದರೆ ಕೆಟ್ಟಕಾಲ.
ಉತ್ಸರ್ಪಿಣೀಕಾಲದಲ್ಲಿ ಆಯುಸ್ಸು ಮೊದಲಾದವುಗಳು ಹೆಚ್ಚುತ್ತಾ ಹೋಗುವುದಾದರೆ
ಅವಸರ್ಪಿಣೀಕಾಲದಲ್ಲಿ ಕಡಿಮೆ ಆಗುತ್ತಾ ಹೋಗುವುದು.
ಅವಸರ್ಪಿಣೀಕಾಲದಲ್ಲಿ ಕಡಿಮೆ ಆಗುತ್ತಾ ಹೋಗುವುದು.
ಕೃಷ್ಣಪಕ್ಷ, ಶುಕ್ಲಪಕ್ಷಗಳು ಒಂದರನಂತರ ಮತ್ತೊಂದು ತಿರುಗುತ್ತಿರುವಂತೆ ಆರು ಕಾಲಭೇದಗಳ
ಪರಿವರ್ತನೆಗಳಿಂದ ಕೂಡಿದ ಉತ್ಸರ್ಪಿಣೀ ಅವಸರ್ಪಿಣೀ ಕಾಲಗಳೂ ಸಹ ತಿರುಗುತ್ತಿರುತ್ತವೆ.
ಪರಿವರ್ತನೆಗಳಿಂದ ಕೂಡಿದ ಉತ್ಸರ್ಪಿಣೀ ಅವಸರ್ಪಿಣೀ ಕಾಲಗಳೂ ಸಹ ತಿರುಗುತ್ತಿರುತ್ತವೆ.
ಅವಸರ್ಪಿಣೀ ಕಾಲಗಣನೆ
ಸುಷಮಸುಷಮಾ - 4 ಕೋಟಿ ಕೋಟಿ ಸಂವತ್ಸರಗಳು
ಸುಷಮಾ - 3 ಕೋಟಿ ಕೋಟಿ ಸಂವತ್ಸರಗಳು
ಸುಷಮದುಃಷಮಾ - 2 ಕೋಟಿ ಕೋಟಿ ಸಂವತ್ಸರಗಳು
ದುಃಷಮಸುಷಮಾ, ದುಃಷಮಾ, ಅತಿದುಃಷಮಾ - 1 ಕೋಟಿ ಕೋಟಿ ಸಂವತ್ಸರಗಳು.
ಒಟ್ಟು 10 ಕೋಟಿ ಕೋಟಿ ಸಂವತ್ಸರಗಳು
ಉತ್ಸರ್ಪಿಣೀಕಾಲಗಣನೆ
ಅತಿದುಃಷಮಾ - 4 ಕೋಟಿ ಕೋಟಿ ಸಂವತ್ಸರಗಳು
ದುಃಷಮಾ - 3 ಕೋಟಿ ಕೋಟಿ ಸಂವತ್ಸರಗಳು
ದುಃಷಮಸುಷಮಾ - 2 ಕೋಟಿ ಕೋಟಿ ಸಂವತ್ಸರಗಳು
ಸುಷಮದುಃಷಮಾ, ಸುಷಮಾ, ಸುಷಮಸುಷಮಾ. - 1 ಕೋಟಿ ಕೋಟಿ ಸಂವತ್ಸರಗಳು
ಒಟ್ಟು 10 ಕೋಟಿ ಕೋಟಿ ಸಂವತ್ಸರಗಳು
ಅವಸರ್ಪಿಣೀಕಾಲ + ಉತ್ಸರ್ಪಿಣೀಕಾಲ = ಒಂದು ಕಲ್ಪ = 20 ಕೋಟಿ ಕೋಟಿ ಸಂವತ್ಸರಗಳು
ಮಹಾಪುರಾಣದಲ್ಲಿನ ಹದಿನಾಲ್ಕು ಮನುಗಳು
ಶರೀರದ ಪರಿಮಾಣ
ಪ್ರತಿಶ್ರುತಿ. 1800 ಧನುಸ್ಸಿನಷ್ಟು
ಸನ್ಮತಿ. 1500 ಧನುಸ್ಸಿನಷ್ಟು
ಕ್ಷೇಮಂಕರ. 800 ಧನುಸ್ಸಿನಷ್ಟು
ಕ್ಷೇಮಂಧರ. 750 ಧನುಸ್ಸಿನಷ್ಟು
ಸೀಮಂಕರ. 750 ಧನುಸ್ಸಿನಷ್ಟು
ಸೀಮಂಧರ. 725 ಧನುಸ್ಸಿನಷ್ಟು
ವಿಮಲವಾಹನ. 700 ಧನುಸ್ಸಿನಷ್ಟು
ಚಕ್ಷುಷ್ಮಾನ್. 675 ಧನುಸ್ಸಿನಷ್ಟು
ಯಶಸ್ವಾನ್. 650 ಧನುಸ್ಸಿನಷ್ಟು
ಅಭಿಚಂದ್ರ. 625 ಧನುಸ್ಸಿನಷ್ಟು
ಚಂದ್ರಾಭ. 600 ಧನುಸ್ಸಿನಷ್ಟು
ಮರುದ್ದೇವ. 575 ಧನುಸ್ಸಿನಷ್ಟು
ಪ್ರಸೇನಜಿತ್. 550 ಧನುಸ್ಸಿನಷ್ಟು
ನಾಭಿರಾಜ. 525 ಧನುಸ್ಸಿನಷ್ಟು
ಒಂದು ಧನುಸ್ಸಿನ ಉದ್ದವು ಸಾಮಾನ್ಯವಾಗಿ 5 ಅಡಿ ಇರುವುದು.
ಮನುಗಳ ಆಯುಷ್ಯವನ್ನು ನಿಶ್ಚಯಿಸಿರುವುದು ಹೀಗೆ :-
84 ಲಕ್ಷ ವರ್ಷ = ಒಂದು ಪೂರ್ವಾಂಗ
84 X 84 ಲಕ್ಷ ವರ್ಷ = ಒಂದು ಪೂರ್ವ
ಪೂರ್ವ X 1 ಕೋಟಿ = ಒಂದು ಪೂರ್ವ ಕೋಟಿ
ಪೂರ್ವ X 84 = ಪರ್ವಾಂಗ
ಪರ್ವಾಂಗ X ಪೂರ್ವಾಂಗ = ಒಂದು ಪರ್ವ
ಪರ್ವ X 84 = ನವುತಾಂಗ
ನವುತಾಂಗ X 84 = ನವುತ
ನವುತ X 84 = ಕುಮುದಾಂಗ
ಕುಮುದಾಂಗ X 84 = ಕುಮುದ
ಕುಮುದ X 84 = ಪದ್ಮಾಂಗ
ಪದ್ಮಾಂಗ X 84 = ಪದ್ಮ
ಪದ್ಮ X 84 = ನಲಿನಾಂಗ
ನಲಿನಾಂಗ X 84 = ನಲಿನ
84 ಲಕ್ಷ ವರ್ಷ = ಒಂದು ಪೂರ್ವಾಂಗ
84 X 84 ಲಕ್ಷ ವರ್ಷ = ಒಂದು ಪೂರ್ವ
ಪೂರ್ವ X 1 ಕೋಟಿ = ಒಂದು ಪೂರ್ವ ಕೋಟಿ
ಪೂರ್ವ X 84 = ಪರ್ವಾಂಗ
ಪರ್ವಾಂಗ X ಪೂರ್ವಾಂಗ = ಒಂದು ಪರ್ವ
ಪರ್ವ X 84 = ನವುತಾಂಗ
ನವುತಾಂಗ X 84 = ನವುತ
ನವುತ X 84 = ಕುಮುದಾಂಗ
ಕುಮುದಾಂಗ X 84 = ಕುಮುದ
ಕುಮುದ X 84 = ಪದ್ಮಾಂಗ
ಪದ್ಮಾಂಗ X 84 = ಪದ್ಮ
ಪದ್ಮ X 84 = ನಲಿನಾಂಗ
ನಲಿನಾಂಗ X 84 = ನಲಿನ
ಹೀಗೆಯೇ ಒಂದೊಂದನ್ನೂ 84ರಿಂದ ಗುಣಿಸುತ್ತಾ ಹೋದಲ್ಲಿ ಬರುವ ವರ್ಣನೆಗಳೆಂದರೆ -
ಕಮಲಾಂಗ, ಕಮಲ, ತುಟ್ಯಂಗ, ತುಟಿಕ, ಅಟಟಾಂಗ, ಅಟಟ, ಅಮಮಾಂಗ, ಅಮಮ,
ಹಾಹಾಂಗ, ಹಾಹಾ, ಹೂಹ್ವಂಗ, ಹೂಹೂ, ಲತಾಂಗ, ಲತಾ, ಮಹಾಲತಾಂಗ, ಮಹಾಲತಾ,
ಶಿರಃಪ್ರಕಂಪಿತ, ಹಸ್ತಪ್ರಹೇಲಿತ, ಅಚಲ.
ಕಮಲಾಂಗ, ಕಮಲ, ತುಟ್ಯಂಗ, ತುಟಿಕ, ಅಟಟಾಂಗ, ಅಟಟ, ಅಮಮಾಂಗ, ಅಮಮ,
ಹಾಹಾಂಗ, ಹಾಹಾ, ಹೂಹ್ವಂಗ, ಹೂಹೂ, ಲತಾಂಗ, ಲತಾ, ಮಹಾಲತಾಂಗ, ಮಹಾಲತಾ,
ಶಿರಃಪ್ರಕಂಪಿತ, ಹಸ್ತಪ್ರಹೇಲಿತ, ಅಚಲ.
ಅವಸರ್ಪಿಣೀ ಕಾಲದಲ್ಲಿನ ಪರಿಸ್ಥಿತಿಗಳು
ಅವಸರ್ಪಿಣೀ ಕಾಲದಲ್ಲಿ ಮೊದಲು ಸುಷಮಸುಷಮಾ ಕಾಲವು ಭರತಖಂಡದಲ್ಲಿ
ಪ್ರಾರಂಭವಾಗಿತ್ತು. ಆ ಕಾಲದಲ್ಲಿ ಭೂಮಿಯು ಯಾವಸ್ಥಿತಿಯಲ್ಲಿತ್ತು ಹಾಗೂ ಮನುಷ್ಯರ
ಜೀವನ ಶೈಲಿ, ಆಯುಷ್ಯ ಇತರೆ ಸ್ಥಿತಿಗಳು ಹೇಗಿತ್ತು ಎಂಬುದನ್ನು ವೃಷಭಜಿನೇಶ್ವರರು ವಿವರಿಸಿದ್ದಾರೆ.
ಅದನ್ನು ನೋಡೋಣ:
ಪ್ರಾರಂಭವಾಗಿತ್ತು. ಆ ಕಾಲದಲ್ಲಿ ಭೂಮಿಯು ಯಾವಸ್ಥಿತಿಯಲ್ಲಿತ್ತು ಹಾಗೂ ಮನುಷ್ಯರ
ಜೀವನ ಶೈಲಿ, ಆಯುಷ್ಯ ಇತರೆ ಸ್ಥಿತಿಗಳು ಹೇಗಿತ್ತು ಎಂಬುದನ್ನು ವೃಷಭಜಿನೇಶ್ವರರು ವಿವರಿಸಿದ್ದಾರೆ.
ಅದನ್ನು ನೋಡೋಣ:
4 ಕೋಟಿ ಕೋಟಿ ಕಾಲದವರೆಗೂ ಸುಷಮಸುಷಮಾ ಕಾಲವಿದ್ದಿತು. ದೇವಕುರು,
ಉತ್ತಮಕುರುಗಳೆಂಬ ಉತ್ತಮವಾದ ಭೋಗ ಭೂಮಿಗಳಲ್ಲಿ ಯಾವ ಸ್ಥಿತಿ ಇತ್ತೋ ಅದೇ ಸ್ಥಿತಿಯು
ಅವಸರ್ಪಿಣೀ ಕಾಲದಲ್ಲಿ ಇದ್ದಿತು. ಆಗ ಮನುಷ್ಯರ ಆಯುಸ್ಸು 3 ಪಲ್ಯೋಪಮದಷ್ಟಿತ್ತು. ಶರೀರವು
6000 ಧನುಸ್ಸಿನಷ್ಟು ಉದ್ಧವಾಗಿತ್ತು. ವಜ್ರಮಯವಾದ ಮೂಳೆಗಳಿದ್ದು ಸುಂದರ ಹಾಗೂ ಸೌಮ್ಯ
ಮತ್ತು ಮನೋಹರವಾಗಿದ್ದರು. ಇಡೀ ಶರೀರವು ಕಾಯಿಸಿದ ಚಿನ್ನದಂತೆ ಪ್ರಕಾಶಿಸುತ್ತಿತ್ತು. ಸದಾ ಕಿರೀಟ,
ಕರ್ಣಕುಂಡಲ, ರತ್ನಾಹಾರ, ಉಡುದಾರ, ಕೈಗಳಿಗೆ ಕಡಗ, ಭುಜಕೀರ್ತಿ, ತೋಳುಬಳೆಗಳನ್ನೂ ಮತ್ತು
ಯಜ್ನೋಪವೀತವನ್ನೂ ಧರಿಸುತ್ತಿದ್ದರು. ಇವರೆಲ್ಲಾ ಧೈರ್ಯಶಾಲಿ, ಬಲಶಾಲಿಗಳಾಗಿದ್ದು ಮಹಾ
ತೇಜಸ್ವಿಗಳಾಗಿ ಪೂಜ್ಯರೆನಿಸಿಕೊಳ್ಳುತ್ತಿದ್ದರು. ಮೂರು ದಿನಕ್ಕೊಮ್ಮೆ ಬೋರೆಕಾಯಿಯಷ್ಟು ಗಾತ್ರದ
ಕಲ್ಪವೃಕ್ಷದ ಆಹಾರವನ್ನು ಸೇವಿಸುತ್ತಿದ್ದರು. ಅವರಿಗೆ ರೋಗ, ಮಲಮೂತ್ರ ಬಾಧೆಗಳಿರಲಿಲ್ಲ. ಅಕಾಲ
ಮರಣವಿಲ್ಲದೆ ತಮ್ಮ ಆಯುಸ್ಸು ಪೂರ್ತಿಯಾಗುವವರೆಗೂ ಬದುಕುತ್ತಿದ್ದರು. ಆಗಿನ ಸ್ತ್ರೀಯರೂ
ಪುರುಷರಷ್ಟೇ ಶರೀರ ಪ್ರಮಾಣ, ಆಯುಸ್ಸು ಇದ್ದು ಅವರು ಪುರುಷರಲ್ಲಿ ಅನುರಕ್ತರಾಗಿ
ಪ್ರಕಾಶಿಸುತ್ತಿದ್ದರು. ಈ ಕಾಲದಲ್ಲಿ ಕಲ್ಪವೃಕ್ಷಗಳು ಯಥೇಷ್ಟವಾಗಿ ಅಭಿವೃದ್ಧಿಗೊಳ್ಳುತ್ತಿದ್ದವು. ಹೀಗೆ ಈ
ಕಾಲದ ಜನಗಳು ಬಹುಕಾಲ ಸುಖದಿಂದ ಜೀವಿಸಿ ಆಯುಷ್ಯ ಪೂರ್ತಿಯಾದ ನಂತರ ಮೇಘಗಳು
ಬಯಲಾಗುವಂತೆ ಮರಣಿಸುತ್ತಿದ್ದರು. ಪುರುಷರು ಅಕಳಿಕೆಯಿಂದಲೂ ಶರೀರತ್ಯಾಗ ಮಾಡಿದರೆ,
ಸ್ತ್ರೀಯರು ಸೀನಿನಿಂದ ಶರೀರತ್ಯಾಗಮಾಡುತ್ತಿದ್ದರು.
ಉತ್ತಮಕುರುಗಳೆಂಬ ಉತ್ತಮವಾದ ಭೋಗ ಭೂಮಿಗಳಲ್ಲಿ ಯಾವ ಸ್ಥಿತಿ ಇತ್ತೋ ಅದೇ ಸ್ಥಿತಿಯು
ಅವಸರ್ಪಿಣೀ ಕಾಲದಲ್ಲಿ ಇದ್ದಿತು. ಆಗ ಮನುಷ್ಯರ ಆಯುಸ್ಸು 3 ಪಲ್ಯೋಪಮದಷ್ಟಿತ್ತು. ಶರೀರವು
6000 ಧನುಸ್ಸಿನಷ್ಟು ಉದ್ಧವಾಗಿತ್ತು. ವಜ್ರಮಯವಾದ ಮೂಳೆಗಳಿದ್ದು ಸುಂದರ ಹಾಗೂ ಸೌಮ್ಯ
ಮತ್ತು ಮನೋಹರವಾಗಿದ್ದರು. ಇಡೀ ಶರೀರವು ಕಾಯಿಸಿದ ಚಿನ್ನದಂತೆ ಪ್ರಕಾಶಿಸುತ್ತಿತ್ತು. ಸದಾ ಕಿರೀಟ,
ಕರ್ಣಕುಂಡಲ, ರತ್ನಾಹಾರ, ಉಡುದಾರ, ಕೈಗಳಿಗೆ ಕಡಗ, ಭುಜಕೀರ್ತಿ, ತೋಳುಬಳೆಗಳನ್ನೂ ಮತ್ತು
ಯಜ್ನೋಪವೀತವನ್ನೂ ಧರಿಸುತ್ತಿದ್ದರು. ಇವರೆಲ್ಲಾ ಧೈರ್ಯಶಾಲಿ, ಬಲಶಾಲಿಗಳಾಗಿದ್ದು ಮಹಾ
ತೇಜಸ್ವಿಗಳಾಗಿ ಪೂಜ್ಯರೆನಿಸಿಕೊಳ್ಳುತ್ತಿದ್ದರು. ಮೂರು ದಿನಕ್ಕೊಮ್ಮೆ ಬೋರೆಕಾಯಿಯಷ್ಟು ಗಾತ್ರದ
ಕಲ್ಪವೃಕ್ಷದ ಆಹಾರವನ್ನು ಸೇವಿಸುತ್ತಿದ್ದರು. ಅವರಿಗೆ ರೋಗ, ಮಲಮೂತ್ರ ಬಾಧೆಗಳಿರಲಿಲ್ಲ. ಅಕಾಲ
ಮರಣವಿಲ್ಲದೆ ತಮ್ಮ ಆಯುಸ್ಸು ಪೂರ್ತಿಯಾಗುವವರೆಗೂ ಬದುಕುತ್ತಿದ್ದರು. ಆಗಿನ ಸ್ತ್ರೀಯರೂ
ಪುರುಷರಷ್ಟೇ ಶರೀರ ಪ್ರಮಾಣ, ಆಯುಸ್ಸು ಇದ್ದು ಅವರು ಪುರುಷರಲ್ಲಿ ಅನುರಕ್ತರಾಗಿ
ಪ್ರಕಾಶಿಸುತ್ತಿದ್ದರು. ಈ ಕಾಲದಲ್ಲಿ ಕಲ್ಪವೃಕ್ಷಗಳು ಯಥೇಷ್ಟವಾಗಿ ಅಭಿವೃದ್ಧಿಗೊಳ್ಳುತ್ತಿದ್ದವು. ಹೀಗೆ ಈ
ಕಾಲದ ಜನಗಳು ಬಹುಕಾಲ ಸುಖದಿಂದ ಜೀವಿಸಿ ಆಯುಷ್ಯ ಪೂರ್ತಿಯಾದ ನಂತರ ಮೇಘಗಳು
ಬಯಲಾಗುವಂತೆ ಮರಣಿಸುತ್ತಿದ್ದರು. ಪುರುಷರು ಅಕಳಿಕೆಯಿಂದಲೂ ಶರೀರತ್ಯಾಗ ಮಾಡಿದರೆ,
ಸ್ತ್ರೀಯರು ಸೀನಿನಿಂದ ಶರೀರತ್ಯಾಗಮಾಡುತ್ತಿದ್ದರು.
ಎರಡನೇ ಕಾಲವಾದ ಸುಷಮಾ ಕಾಲದಲ್ಲಿ ಆ ಕಾಲವು 3 ಕೋಟಿಕೋಟಿ ಸಂವತ್ಸರ. ಆಗಿನ
ಜನಗಳಿಗೆ ಎರಡು ಪಲ್ಯೋಮಗಳಷ್ಟು ಆಯುಸ್ಸು ಇದ್ದು ಅವರ ಶರೀರವು 4000
ಧನುಸ್ಸಿನಷ್ಟು ಎತ್ತರವಾಗಿತ್ತು. ಅವರು ಎರಡು ದಿನಕ್ಕೊಮ್ಮೆ ತಾರೆಕಾಯಿಯಷ್ಟು ಗಾತ್ರದ
ಅನ್ನವನ್ನು ಕಲ್ಪವೃಕ್ಷದಿಂದ ಉಣ್ಣುತ್ತಿದ್ದರು.
ಜನಗಳಿಗೆ ಎರಡು ಪಲ್ಯೋಮಗಳಷ್ಟು ಆಯುಸ್ಸು ಇದ್ದು ಅವರ ಶರೀರವು 4000
ಧನುಸ್ಸಿನಷ್ಟು ಎತ್ತರವಾಗಿತ್ತು. ಅವರು ಎರಡು ದಿನಕ್ಕೊಮ್ಮೆ ತಾರೆಕಾಯಿಯಷ್ಟು ಗಾತ್ರದ
ಅನ್ನವನ್ನು ಕಲ್ಪವೃಕ್ಷದಿಂದ ಉಣ್ಣುತ್ತಿದ್ದರು.
ಮೂರನೇ ಕಾಲವಾದ ಸುಷಮದುಃಷಮಾ ಕಾಲವು 2 ಕೋಟಿಕೋಟಿ ಸಂವತ್ಸರ. ಆ ಕಾಲದ
ಜನರು ಒಂದು ಪ್ಲಯೋಮಕಾಲ ಜೀವಿಸುತ್ತಿದ್ದರು. ಅವರ ಶರೀರವು ಒಂದು ಹರದಾರಿ
ಪ್ರಮಾಣದಷ್ಟು ಎತ್ತರವಾಗಿತ್ತು. ಒಂದು ದಿನ ಬಿಟ್ಟು ಒಂದು ನೆಲ್ಲಿಕಾಯಿ ಗಾತ್ರದ ಭೋಜನವನ್ನು
ಮಾಡುತ್ತಿದ್ದರು.
ಜನರು ಒಂದು ಪ್ಲಯೋಮಕಾಲ ಜೀವಿಸುತ್ತಿದ್ದರು. ಅವರ ಶರೀರವು ಒಂದು ಹರದಾರಿ
ಪ್ರಮಾಣದಷ್ಟು ಎತ್ತರವಾಗಿತ್ತು. ಒಂದು ದಿನ ಬಿಟ್ಟು ಒಂದು ನೆಲ್ಲಿಕಾಯಿ ಗಾತ್ರದ ಭೋಜನವನ್ನು
ಮಾಡುತ್ತಿದ್ದರು.
ನಾಲ್ಕನೇ ಕಾಲವಾದ ದುಃಷಮಸುಷಮಾ, ದುಃಷಮಾ, ಅತಿದುಃಷಮಾ ಕಾಲದಲ್ಲಿ ಒಂದು
ಕೋಟಿಕೋಟಿ ಸಂವತ್ಸರಗಳು. ಈ ಕಾಲದ ಜನಗಳ ಆಯುಸ್ಸು ಒಂದು ಪಲ್ಯೋಯೋಪಮದ
ಹತ್ತನೇ ಒಂದು ಭಾಗದಷ್ಟಿತ್ತು. ಅವರ ಶರೀರವು 1800 ಧನುಸ್ಸಿನಷ್ಟು ಎತ್ತರವಾಗಿತ್ತು.
ಕೋಟಿಕೋಟಿ ಸಂವತ್ಸರಗಳು. ಈ ಕಾಲದ ಜನಗಳ ಆಯುಸ್ಸು ಒಂದು ಪಲ್ಯೋಯೋಪಮದ
ಹತ್ತನೇ ಒಂದು ಭಾಗದಷ್ಟಿತ್ತು. ಅವರ ಶರೀರವು 1800 ಧನುಸ್ಸಿನಷ್ಟು ಎತ್ತರವಾಗಿತ್ತು.
ದುಃಷಮಸುಷಮಾ ಕಾಲದ ಜನಗಳು ಹಿಂದೆದೂ ಕಾಣದಿದ್ದ ಸೂರ್ಯಚಂದ್ರರನ್ನು ನೋಡಿ
ಭಯಭೀತರಾದರು. ಆ ಯುಗದಲ್ಲಿನ ಪ್ರತಿಶ್ರುತಿ ಮನುವು ಜ್ಯೋತಿರಂಗಕಲ್ಪವೃಕ್ಷಗಳ ಪ್ರಭೆಯು
ಕಡಿಮೆಯಾಗುತ್ತಿರುವುದರಿಂದ ಸೂರ್ಯಚಂದ್ರರು ಕಾಣುತ್ತಿದ್ದಾರೆ, ಅದರಿಂದ ಏನೂ ಭಯಪಡ
ಬೇಕಿಲ್ಲವೆಂದು ಜನರನ್ನು ಸಮಾಧಾನಪಡಿಸಿದನು.
ಭಯಭೀತರಾದರು. ಆ ಯುಗದಲ್ಲಿನ ಪ್ರತಿಶ್ರುತಿ ಮನುವು ಜ್ಯೋತಿರಂಗಕಲ್ಪವೃಕ್ಷಗಳ ಪ್ರಭೆಯು
ಕಡಿಮೆಯಾಗುತ್ತಿರುವುದರಿಂದ ಸೂರ್ಯಚಂದ್ರರು ಕಾಣುತ್ತಿದ್ದಾರೆ, ಅದರಿಂದ ಏನೂ ಭಯಪಡ
ಬೇಕಿಲ್ಲವೆಂದು ಜನರನ್ನು ಸಮಾಧಾನಪಡಿಸಿದನು.
ಎರಡನೇ ಮನು ಸನ್ಮತಿಯ ಕಾಲದಲ್ಲಿ ಜನಗಳು ರಾತ್ರೆಯವೇಳೆ ನಕ್ಷತ್ರಗಳನ್ನು ನೋಡಿ
ಗಾಭರಿಯಾದರು. ಮನುವು ಜನಗಳಿಗೆ ಸಮಾಧಾನ ಮಾಡಿ ನಕ್ಷತ್ರಗಳ ಬಗ್ಗೆ ತಿಳುವಳಿಕೆಯನ್ನು
ನೀಡಿದನು.
ಗಾಭರಿಯಾದರು. ಮನುವು ಜನಗಳಿಗೆ ಸಮಾಧಾನ ಮಾಡಿ ನಕ್ಷತ್ರಗಳ ಬಗ್ಗೆ ತಿಳುವಳಿಕೆಯನ್ನು
ನೀಡಿದನು.
ಮೂರನೇ ಮನು ಕ್ಷೇಮಂಕರನ ಕಾಲದಲ್ಲಿ ಪ್ರಜೆಗಳು ತಮ್ಮ ಕೈಗಳಿಂದ ಲಾಲನೆ ಪಾಲನೆ
ಮಾಡುತ್ತಿದ್ದ ಶಾಂತಸ್ವಭಾವದ ಸಿಂಹ ಮೊದಲಾದ ಮೃಗಗಳು ವಿಕಾರವನ್ನು ಹೊಂದಿ ಬಾಯಿ
ತೆಗೆದು ಭಯಂಕರವಾದ ಶಬ್ದವನ್ನು ಮಾಡಲು ಪ್ರಾರಂಭಿಸಿತು. ಆಗ ಮನುವು ಈ ವಿಧದ
ಪ್ರಾಣಿಗಳು ಈಗ ಕಾಲದೋಷದಿಂದ ವಿಕಾರವನ್ನು ಹೊಂದಿವೆಯೆಂದೂ ಅವುಗಳನ್ನು
ದೂರಮಾಡುವಂತೆ ತಿಳಿಸಿದನು.
ಮಾಡುತ್ತಿದ್ದ ಶಾಂತಸ್ವಭಾವದ ಸಿಂಹ ಮೊದಲಾದ ಮೃಗಗಳು ವಿಕಾರವನ್ನು ಹೊಂದಿ ಬಾಯಿ
ತೆಗೆದು ಭಯಂಕರವಾದ ಶಬ್ದವನ್ನು ಮಾಡಲು ಪ್ರಾರಂಭಿಸಿತು. ಆಗ ಮನುವು ಈ ವಿಧದ
ಪ್ರಾಣಿಗಳು ಈಗ ಕಾಲದೋಷದಿಂದ ವಿಕಾರವನ್ನು ಹೊಂದಿವೆಯೆಂದೂ ಅವುಗಳನ್ನು
ದೂರಮಾಡುವಂತೆ ತಿಳಿಸಿದನು.
ಐದನೇ ಮನು ಸೀಮಂಕರನ ಕಾಲದಲ್ಲಿ ಕಲ್ಪವೃಕ್ಷಗಳು ಕಡಿಮೆಯಾಗಿ ಸ್ವಲ್ಪ ಫಲಗಳನ್ನು
ಕೊಡುವುದಕ್ಕೆ ಪ್ರಾರಂಭಿಸಿದಾಗ ಕಲ್ಪವೃಕ್ಷಗಳ ಒಡೆತನದ ಸಲುವಾಗಿ ಜನಗಳಲ್ಲಿ ವಿವಾದ
ಹುಟ್ಟಿಕೊಂಡಿತು. ಆಗ ಮನುವು ಕಲ್ಪವೃಕ್ಷಗಳಿಗೆ ಬೇಲಿಯನ್ನು ನಿರ್ಮಿಸಿ ಜನಗಳ
ಗುಂಪುಗಳಿಗೆ ಸಮನಾಗಿ ಹಂಚಿಕೊಟ್ಟನು.
ಕೊಡುವುದಕ್ಕೆ ಪ್ರಾರಂಭಿಸಿದಾಗ ಕಲ್ಪವೃಕ್ಷಗಳ ಒಡೆತನದ ಸಲುವಾಗಿ ಜನಗಳಲ್ಲಿ ವಿವಾದ
ಹುಟ್ಟಿಕೊಂಡಿತು. ಆಗ ಮನುವು ಕಲ್ಪವೃಕ್ಷಗಳಿಗೆ ಬೇಲಿಯನ್ನು ನಿರ್ಮಿಸಿ ಜನಗಳ
ಗುಂಪುಗಳಿಗೆ ಸಮನಾಗಿ ಹಂಚಿಕೊಟ್ಟನು.
7ನೇ ಮನು ವಿಮಲವಾಹನನ ಕಾಲದಲ್ಲಿ ತನ್ನ ಪ್ರಜೆಗಳಿಗೆ ಆನೆ, ಕುದುರೆ ಮೊದಲಾದ ವಾಹನಗಳ
ಸವಾರಿಯನ್ನೂ, ಕೊಡಲಿ, ಅಂಕುಶ ಇತ್ಯಾದಿಗಳ ಉಪಯೋಗವನ್ನೂ ಉಪದೇಶ ಮಾಡಿದನು.
ಸವಾರಿಯನ್ನೂ, ಕೊಡಲಿ, ಅಂಕುಶ ಇತ್ಯಾದಿಗಳ ಉಪಯೋಗವನ್ನೂ ಉಪದೇಶ ಮಾಡಿದನು.
8ನೇ ಮನು ಚಕ್ಷುಷ್ಮಾನನ ಕಾಲದಲ್ಲಿ ಪ್ರಜೆಗಳು ಮೊದಲಬಾರಿಗೆ ಒಂದು ಕ್ಷಣ ತಮ್ಮ ಮಕ್ಕಳನ್ನು
ನೋಡಿ ಭಯಭೀತರಾದರು. ಅಲ್ಲಿಯವರೆಗೂ ಜನಗಳು ಮಕ್ಕಳು ಜನಿಸುತ್ತಿದ್ದಂತೆ ಅವುಗಳನ್ನು
ನೋಡದೆ ಮರಣಿಸುತ್ತಿದ್ದರು. ಆಗ ಮನುವು, "ಆ ಮಕ್ಕಳು ನಿಮ್ಮ ಮಕ್ಕಳೇ," ಎಂದು ಸಮಾಧಾನ
ಪಡಿಸಿದನು.
ಪ್ರಜೆಗಳು ತಮ್ಮ ಮಕ್ಕಳನ್ನು ಕೆಲವು ಕ್ಷಣಕಾಲದಷ್ಟು ಹೊತ್ತು ದರ್ಶನ ಮಾಡುತ್ತಿದ್ದರು.
ನೋಡಿ ಭಯಭೀತರಾದರು. ಅಲ್ಲಿಯವರೆಗೂ ಜನಗಳು ಮಕ್ಕಳು ಜನಿಸುತ್ತಿದ್ದಂತೆ ಅವುಗಳನ್ನು
ನೋಡದೆ ಮರಣಿಸುತ್ತಿದ್ದರು. ಆಗ ಮನುವು, "ಆ ಮಕ್ಕಳು ನಿಮ್ಮ ಮಕ್ಕಳೇ," ಎಂದು ಸಮಾಧಾನ
ಪಡಿಸಿದನು.
ಪ್ರಜೆಗಳು ತಮ್ಮ ಮಕ್ಕಳನ್ನು ಕೆಲವು ಕ್ಷಣಕಾಲದಷ್ಟು ಹೊತ್ತು ದರ್ಶನ ಮಾಡುತ್ತಿದ್ದರು.
9ನೇ ಮನು ಯಶಸ್ವಾನನ ಕಾಲದಲ್ಲಿ ಪ್ರಜೆಗಳು ತಮ್ಮ ಮಕ್ಕಳನ್ನು ನೋಡಿ
ಆಶೀರ್ವಾದವನ್ನು ಮಾಡಿ ಸ್ವಲ್ಪ ಹೊತ್ತು ಬದುಕಿದ್ದು ನಂತರ ಮರಣಿಸುತ್ತಿದ್ದರು.
ಆಶೀರ್ವಾದವನ್ನು ಮಾಡಿ ಸ್ವಲ್ಪ ಹೊತ್ತು ಬದುಕಿದ್ದು ನಂತರ ಮರಣಿಸುತ್ತಿದ್ದರು.
10ನೇ ಮನು ಅಭಿಚಂದ್ರನ ಕಾಲದಲ್ಲಿ ಪ್ರಜೆಗಳು ತಮ್ಮ ಮಕ್ಕಳ ಮುಖವನ್ನು ಕುತೂಹಲದಿಂದ
ನೋಡಿ, ಅವರಿಗೆ ಆಶೀರ್ವಾದ ಮಾಡಿ, ರಾತ್ರೆಯ ಕಾಲದಲ್ಲಿ ಅವರಿಗೆ ಚಂದ್ರದರ್ಶನವನ್ನು ಮಾಡಿಸಿ
ಅವರೊಂದಿಗೆ ಆಟವಾಡುತ್ತಿದ್ದರು.
ನೋಡಿ, ಅವರಿಗೆ ಆಶೀರ್ವಾದ ಮಾಡಿ, ರಾತ್ರೆಯ ಕಾಲದಲ್ಲಿ ಅವರಿಗೆ ಚಂದ್ರದರ್ಶನವನ್ನು ಮಾಡಿಸಿ
ಅವರೊಂದಿಗೆ ಆಟವಾಡುತ್ತಿದ್ದರು.
11ನೇ ಮನು ಚಂದ್ರಾಭನ ಕಾಲದಲ್ಲಿ ಪ್ರಜೆಗಳು ತಮ್ಮ ಮಕ್ಕಳೊಂದಿಗೆ ಕೆಲಕಾಲ ಜೀವಿಸುತ್ತಿದ್ದರು.
12ನೇ ಮನು ಮರುದ್ದೇವನ ಕಾಲದಲ್ಲಿ ಪ್ರಜೆಗಳು ಮಕ್ಕಳ ಮುಖವನ್ನು ನೋಡಿ ಆ ಮಕ್ಕಳ
ಆಲಿಂಗನದ ಸಂತೋಷವನ್ನು ಅನುಭವಿಸುತ್ತಿದ್ದರು. ಈ ಮನುವು ತನ್ನ ಕಾಲದಲ್ಲಿ ನೀರಿನಲ್ಲಿ ಸಂಚಾರ
ಮಾಡಲು ದೋಣಿ, ಹಡಗುಗಳನ್ನು ನಿರ್ಮಿಸಲು ಪ್ರಜೆಗಳಿಗೆ ಹೇಳಿಕೊಟ್ಟನು ಹಾಗೂ ಗಿರಿ
ದುರ್ಗಗಳನ್ನು ಹತ್ತಲು ಏಣಿ ಪದ್ಧತಿಯನ್ನು ಮಾಡಿಸಿದನು. ಇವನ ಕಾಲದಲ್ಲಿಯೇ ಸಣ್ಣ ಪರ್ವತಗಳು,
ಸಣ್ಣನದಿಗಳೂ, ಉಪಸಮುದ್ರಗಳೂ ಹುಟ್ಟಿದವು.
ಆಲಿಂಗನದ ಸಂತೋಷವನ್ನು ಅನುಭವಿಸುತ್ತಿದ್ದರು. ಈ ಮನುವು ತನ್ನ ಕಾಲದಲ್ಲಿ ನೀರಿನಲ್ಲಿ ಸಂಚಾರ
ಮಾಡಲು ದೋಣಿ, ಹಡಗುಗಳನ್ನು ನಿರ್ಮಿಸಲು ಪ್ರಜೆಗಳಿಗೆ ಹೇಳಿಕೊಟ್ಟನು ಹಾಗೂ ಗಿರಿ
ದುರ್ಗಗಳನ್ನು ಹತ್ತಲು ಏಣಿ ಪದ್ಧತಿಯನ್ನು ಮಾಡಿಸಿದನು. ಇವನ ಕಾಲದಲ್ಲಿಯೇ ಸಣ್ಣ ಪರ್ವತಗಳು,
ಸಣ್ಣನದಿಗಳೂ, ಉಪಸಮುದ್ರಗಳೂ ಹುಟ್ಟಿದವು.
13ನೇ ಮನು ಪ್ರಸೇನಾಜಿತ್ ಕಾಲದಲ್ಲಿ ಮಕ್ಕಳು ಜರಾಯುಪಟಲದಿಂದ ಅಚ್ಚಾದಿತವಾಗಿ
ಹುಟ್ಟುತ್ತಿದ್ದವು. ಆಗ ಮನುವು ಜರಾಯುಪಟಲದ ಚೀಲದಿಂದ ಮಕ್ಕಳನ್ನು ಬೇರ್ಪಡಿಸುವ
ವಿಧಾನವನ್ನು ಜನಗಳಿಗೆ ಹೇಳಿಕೊಟ್ಟನು.
ಹುಟ್ಟುತ್ತಿದ್ದವು. ಆಗ ಮನುವು ಜರಾಯುಪಟಲದ ಚೀಲದಿಂದ ಮಕ್ಕಳನ್ನು ಬೇರ್ಪಡಿಸುವ
ವಿಧಾನವನ್ನು ಜನಗಳಿಗೆ ಹೇಳಿಕೊಟ್ಟನು.
14ನೇ ಮನು ನಾಭಿರಾಜನ ಕಾಲದಲ್ಲಿ ಮಕ್ಕಳು ಹುಟ್ಟುವಾಗ ಹೊಕ್ಕಳಲ್ಲಿ ದಾರವು
ಕಾಣಿಸತೊಡಗಿತು. ಮನುವು ಅದನ್ನು ಕತ್ತರಿಸಿ ತೆಗೆಯುವ ಉಪಾಯವನ್ನು ಪ್ರಜೆಗಳಿಗೆ
ಹೇಳಿಕೊಟ್ಟನು.
ಕಾಣಿಸತೊಡಗಿತು. ಮನುವು ಅದನ್ನು ಕತ್ತರಿಸಿ ತೆಗೆಯುವ ಉಪಾಯವನ್ನು ಪ್ರಜೆಗಳಿಗೆ
ಹೇಳಿಕೊಟ್ಟನು.
14ಜನ ಮನುಗಳಲ್ಲಿ ಮೊದಲ 5 ಮನುಗಳು ತಪ್ಪು ಮಾಡಿದ ಪ್ರಜೆಗಳಿಗೆ "ಹಾ" ಎಂಬ
ಶಿಕ್ಷೆಯನ್ನು ವಿಧಿಸುತ್ತಿದ್ದರೆ, ನಂತರದ 5 ಮನುಗಳು "ಹಾ ಮಾ" ಎಂಬ ಶಿಕ್ಷೆಯನ್ನು
ವಿಧಿಸುತ್ತಿದ್ದರು. ಮಿಕ್ಕ 4 ಮನುಗಳು "ಹಾ ಮಾ ಧಿಕ್" ಎಂಬ ಶಿಕ್ಷೆಯನ್ನು ವಿಧಿಸುತ್ತಿದ್ದರು.
ಶಿಕ್ಷೆಯನ್ನು ವಿಧಿಸುತ್ತಿದ್ದರೆ, ನಂತರದ 5 ಮನುಗಳು "ಹಾ ಮಾ" ಎಂಬ ಶಿಕ್ಷೆಯನ್ನು
ವಿಧಿಸುತ್ತಿದ್ದರು. ಮಿಕ್ಕ 4 ಮನುಗಳು "ಹಾ ಮಾ ಧಿಕ್" ಎಂಬ ಶಿಕ್ಷೆಯನ್ನು ವಿಧಿಸುತ್ತಿದ್ದರು.
ನಂತರದಲ್ಲಿ ಬಂದ ಭರತ ಚಕ್ರವರ್ತಿಯು ಅಧಿಕವಾಗಿ ತಪ್ಪುಮಾಡಿದವರಿಗೆ ವಧೆ, ಬಂದಿಖಾನೆ
ಮುಂತಾದ ಶಾರೀರಿಕ ಶಿಕ್ಷೆಗಳನ್ನು ವಿಧಿಸುತ್ತಿದ್ದನು.
ಮುಂತಾದ ಶಾರೀರಿಕ ಶಿಕ್ಷೆಗಳನ್ನು ವಿಧಿಸುತ್ತಿದ್ದನು.
ಮೂಲ: ಭಗವಜ್ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯ ವಿರಚಿತ ಮಹಾಪುರಾಣ.