copy paste disbler

Tuesday, March 17, 2020

ಕವಿಯ ಕವಿತಾಶಕ್ತಿ

ಕವಿಯ ಕವಿತಾಶಕ್ತಿ

ಕವಿಯ ಕವಿತ್ವ ರಚನೆಯ ಶಕ್ತಿಯು ಅಥವಾ ಶಬ್ದಾರ್ಥ ರಚನೆಯ ಕಾರ್ಯವು ಕಾವ್ಯವೆಂದು
ಕವಿತೆಯನ್ನು ಅರಿತವರು ಹೇಳುವರು. ಅಂತಹ ಕಾವ್ಯವು ಪ್ರಸಿದ್ಧವಾದ ಅರ್ಥವುಳ್ಳದ್ದೂ,
ಅಲಂಕಾರದಿಂದ ಕೂಡಿದ್ದೂ ಹಾಗೂ ರಾಸಾಲಂಕಾರದಿಂದ ಸಂಕುಚಿತವಾಗಿಲ್ಲದ್ದೂ
ಆಗಿರಬೇಕು.


ಕೆಲವರು ಕವಿಯ ವಾಕ್ಯಗಳಿಗೆ ಸುಂದರವಾದ ಅರ್ಥವನ್ನು ಅಲಂಕಾರವೆನ್ನುವರು, ಮತ್ತೆ ಕೆಲವರು
ವಿದ್ವಾಂಸರ ಮನಸ್ಸಿಗೆ ಸಂತೋಷವನ್ನುಂಟುಮಾಡುವ ಪದಗಳನ್ನು ಅಲಂಕಾರವೆನ್ನುವರು.
ಇವೆರಡನ್ನೂ ಒಪ್ಪಬಹುದು.


ಅಲಂಕಾರದಿಂದ ಕೂಡಿದ ಶೃಂಗಾರಾದಿ ರಸಭಾರಿತವೂ ಸಾಮ್ಯವುಳ್ಳದ್ದೂ ಬೇರೆಯವರ
ಅಭಿಪ್ರಾಯರಹಿತವಾದ ಸತ್ಪುರುಷರ ಕಾವ್ಯವು ಸರಸ್ವತಿಯ ವದನದಂತಿರುತ್ತದೆ.


ಯಾರು ಉತ್ತಮವಾದ ಪದರಚನೆಯುಳ್ಳ, ಆಲಿಸುವುದಕ್ಕೆ ಮಧುರವಾಗಿದ್ದು ಹಾಗೂ
ಅನಂದವನ್ನುಂಟುಮಾಡುವ ಅರ್ಥಗಳಿಂದ ಕೂಡಿದ ಕಾವ್ಯವನ್ನು ರಚಿಸುವರೋ ಅವರೇ
ಮಹಾಕವಿಗಳು.


ಕೆಲವು ಪದ್ಯಗಳನ್ನು ಎಲ್ಲ ಕವಿಗಳೂ ಕಷ್ಟಪಟ್ಟು ರಚಿಸುತ್ತಾರೆ. ಆದರೆ ಪೂರ್ವಾಪರ
ಸಂಬಂಧಗಳಿಂದ ಕವಿತೆಯನ್ನು ರಚಿಸುವುದು ಕಷ್ಟ.


ವಚನವೆಂಬ ದೊಡ್ಡ ಮಾರ್ಗದಲ್ಲಿ ಸಂಚರಿಸುವವನು ಅರ್ಥವೆಂಬ ಅರಣ್ಯದಲ್ಲಿ ಸಂಚರಿಸಿ
ಖಿನ್ನನಾದ ಕವಿಯು ವಿಶ್ರಮಿಸಲು ಮಹಾಕವಿಗಳೆಂಬ ವೃಕ್ಷವನ್ನು ಆಶ್ರಯಿಸಲೇ ಬೇಕು.


ಬುದ್ದಿ ಅಥವಾ ಪ್ರತಿಭೆ ಎಂಬ ಬೇರುಳ್ಳ, ಗುಣವೆಂಬ ಕಾಂಡವುಳ್ಳ, ವಚನವೆಂಬ ಬಳ್ಳಿಗಳಿಂದ
ಪ್ರಕಾಶಿಸುವ ಮಹಾಕವಿ ಎಂಬ ವೃಕ್ಷವು ಹೂವಿನ ಗೊಂಚಲನ್ನು ಧರಿಸುತ್ತದೆ.


ಬುದ್ಧಿಯೆಂಬ ದಡ ಉಳ್ಳವನೂ, ಉಪಮಾದಿ ಅಲಂಕಾರಗಳೆಂಬ ಮಾಲೆಯುಳ್ಳವನೂ,
ಔದಾರ್ಯ ಎಂಬ ಗುಣಗಳೆಂಬ ರತ್ನಗಳನ್ನು ಉಳ್ಳವನೂ, ಗುರುಪರಂಪರಾರೂಪವಾದ
ಮಹಾಪ್ರವಾಹ ಉಳ್ಳವನೂ ಆದ ಕವಿಯು ಸಮುದ್ರದಂತೆ ಆಚರಿಸುತ್ತಾನೆ. 

ಮೂಲ : ಮಹಾಪುರಾಣ

No comments:

Post a Comment