ಧರ್ಮಶ್ರವಣದ ಶ್ರೋತೃಗಳು
ಧರ್ಮಶ್ರವಣದಲ್ಲಿ ಯಾರು ಅಸಕ್ತರಾಗಿರುತ್ತಾರೋ ಅವರನ್ನೆಲ್ಲಾ ಶ್ರೋತೃಗಳೆಂದು ಜ್ಞಾನಿಗಳು
ಹೇಳುವರು. ಅವರಲ್ಲಿ ಉತ್ತಮರು, ಮಧ್ಯಮರು ಹಾಗೂ ನಿಕೃಷ್ಟರು ಎಂಬ ಶ್ರೋತೃಗಳಿರುವರು.
ಅದನ್ನು ಅರಿಯಲು ಮುಂದಿನ ಕಾಲ್ಪನಿಕ ದೃಷ್ಟಾಂತವನ್ನು ಗಮನಿಸೋಣ:
ಮಣ್ಣು, ವಂದ್ರೀ, ಆಡು, ಬೆಕ್ಕು, ಗಿಣಿ, ಬಾಚಣಿಗೆ, ಕಲ್ಲು, ಸರ್ಪ, ಗೋವು, ಹಂಸಪಕ್ಷಿ, ಕೋಣ,
ತೂತುಗಡಿಗೆ, ಕಚ್ಚುವ ನೊಣ ಮತ್ತು ಜಿಗಣೆ - ಈ 15 ವಸ್ತುಗಳ ಸ್ವಭಾವದಂತಿರುವ ಶ್ರೋತೃಗಳಲ್ಲಿ ಪ್ರಮುಖವಾಗಿ
ಉತ್ತಮ, ಮಧ್ಯಮ ಮತ್ತು ಅಧಮ ಎಂಬ ಮೂರು ಭೇದಗಳಿವೆ. ಇದಲ್ಲದೇ ಇನ್ನೂ ವಿಲಕ್ಷಣವಾದ ಶ್ರೋತೃಗಳೂ
ಇರುತ್ತಾರೆ.
ಗೋವು, ಹಂಸಪಕ್ಷಿ ಇವುಗಳಿಗೆ ಸಮಾನರಾದವರು ಉತ್ತಮ ಶ್ರೋತೃಗಳು; ಗೋವು
ಸರೋವರದ ನೀರನ್ನು ಕದಡದೆ ಮೇಲಿನ ತಿಳಿನೀರನ್ನೇ ಕುಡಿಯುತ್ತವೆ. ಹಂಸಪಕ್ಷಿಯು
ನೀರನ್ನು ಬಿಟ್ಟು ಹಾಲನ್ನು ಮಾತ್ರ ಕುಡಿಯುವುದು. ಹಾಗೆ ಉತ್ತಮ ಶ್ರೋತೃಗಳು ದೋಷಗಳನ್ನು
ಬಿಟ್ಟು ಒಳ್ಳೆಯ ಗುಣಗಳನ್ನು ಮಾತ್ರ ಸ್ವೀಕರಿಸುತ್ತಾರೆ.
ಮಣ್ಣು, ಗಿಣಿ ಇವುಗಳಿಗೆ ಸಮಾನರಾದವರು ಮಧ್ಯಮ ಶ್ರೋತೃಗಳು - ಮಣ್ಣನ್ನು ನೆನೆಯಿಸಿದರೆ
ಸ್ವಲ್ಪಹೊತ್ತು ಮೃದುವಾಗಿ ಪುನಃ ಶುಷ್ಕವಾಗುವುದು. ಗಿಳಿಯು ಹೇಳಿಕೊಟ್ಟಷ್ಟು ಮಾತನ್ನು ಮಾತ್ರ
ಹೇಳುತ್ತದೆ. ಇಂತಹ ಸ್ವಭಾವದವರು ಮಧ್ಯಮರು.
ಮಿಕ್ಕ ಪದಾರ್ಥಗಳ ಸ್ವಭಾವದಂತೆ ಸ್ವಭಾವವುಳ್ಳವನು ಅಧಮ ಶ್ರೋತೃ ಎಂದು ಜ್ಞಾನಿಗಳು
ಹೇಳುವರು.
ದರ್ಪಣ, ತಕ್ಕಡಿ, ದಂಡ, ಒರೆಗಲ್ಲು ಇವುಗಳಿಗೆ ಸಮಾನರಾದ ಶ್ರೋತೃಗಳು ರತ್ನಗಳನ್ನು
ಪರೀಕ್ಷೆಮಾಡುವುದಕ್ಕೆ ಅಧಿಕಾರಿಗಳು.
ಶ್ರೋತೃವು ಕಥಾಶ್ರವಣದಿಂದ ಲೌಕಿಕ ಫಲವನ್ನು ನಿರೀಕ್ಷಿಸಬಾರದು. ಕಥೆಯನ್ನು
ಹೇಳುವವನು ಶ್ರೋತೃಗಳಿಂದ ಸತ್ಕಾರವನ್ನೂ ಹಣವನ್ನೂ ಮೊದಲಾದ ಯಾವ
ಪ್ರತಿಫಲವನ್ನೂ ನಿರೀಕ್ಷಿಸಕೂಡದು.
ಶ್ರೋತೃವು ಧರ್ಮಕಥೆಯನ್ನು ಕೇಳಲು ಇಚ್ಛಿಸುವ ಗುಣದಿಂದ ಪ್ರಶಂಸಿಸಲ್ಪಡುತ್ತಾನೆ.
ಕಥೆಯನ್ನು ಹೇಳುವವನು ವಾತ್ಸಲ್ಯಾದಿ ಗುಣಗಳಿಂದ ಭೂಷಿತನಾಗಿರಬೇಕು
ಹೇಳುವರು. ಅವರಲ್ಲಿ ಉತ್ತಮರು, ಮಧ್ಯಮರು ಹಾಗೂ ನಿಕೃಷ್ಟರು ಎಂಬ ಶ್ರೋತೃಗಳಿರುವರು.
ಅದನ್ನು ಅರಿಯಲು ಮುಂದಿನ ಕಾಲ್ಪನಿಕ ದೃಷ್ಟಾಂತವನ್ನು ಗಮನಿಸೋಣ:
ಮಣ್ಣು, ವಂದ್ರೀ, ಆಡು, ಬೆಕ್ಕು, ಗಿಣಿ, ಬಾಚಣಿಗೆ, ಕಲ್ಲು, ಸರ್ಪ, ಗೋವು, ಹಂಸಪಕ್ಷಿ, ಕೋಣ,
ತೂತುಗಡಿಗೆ, ಕಚ್ಚುವ ನೊಣ ಮತ್ತು ಜಿಗಣೆ - ಈ 15 ವಸ್ತುಗಳ ಸ್ವಭಾವದಂತಿರುವ ಶ್ರೋತೃಗಳಲ್ಲಿ ಪ್ರಮುಖವಾಗಿ
ಉತ್ತಮ, ಮಧ್ಯಮ ಮತ್ತು ಅಧಮ ಎಂಬ ಮೂರು ಭೇದಗಳಿವೆ. ಇದಲ್ಲದೇ ಇನ್ನೂ ವಿಲಕ್ಷಣವಾದ ಶ್ರೋತೃಗಳೂ
ಇರುತ್ತಾರೆ.
ಗೋವು, ಹಂಸಪಕ್ಷಿ ಇವುಗಳಿಗೆ ಸಮಾನರಾದವರು ಉತ್ತಮ ಶ್ರೋತೃಗಳು; ಗೋವು
ಸರೋವರದ ನೀರನ್ನು ಕದಡದೆ ಮೇಲಿನ ತಿಳಿನೀರನ್ನೇ ಕುಡಿಯುತ್ತವೆ. ಹಂಸಪಕ್ಷಿಯು
ನೀರನ್ನು ಬಿಟ್ಟು ಹಾಲನ್ನು ಮಾತ್ರ ಕುಡಿಯುವುದು. ಹಾಗೆ ಉತ್ತಮ ಶ್ರೋತೃಗಳು ದೋಷಗಳನ್ನು
ಬಿಟ್ಟು ಒಳ್ಳೆಯ ಗುಣಗಳನ್ನು ಮಾತ್ರ ಸ್ವೀಕರಿಸುತ್ತಾರೆ.
ಮಣ್ಣು, ಗಿಣಿ ಇವುಗಳಿಗೆ ಸಮಾನರಾದವರು ಮಧ್ಯಮ ಶ್ರೋತೃಗಳು - ಮಣ್ಣನ್ನು ನೆನೆಯಿಸಿದರೆ
ಸ್ವಲ್ಪಹೊತ್ತು ಮೃದುವಾಗಿ ಪುನಃ ಶುಷ್ಕವಾಗುವುದು. ಗಿಳಿಯು ಹೇಳಿಕೊಟ್ಟಷ್ಟು ಮಾತನ್ನು ಮಾತ್ರ
ಹೇಳುತ್ತದೆ. ಇಂತಹ ಸ್ವಭಾವದವರು ಮಧ್ಯಮರು.
ಮಿಕ್ಕ ಪದಾರ್ಥಗಳ ಸ್ವಭಾವದಂತೆ ಸ್ವಭಾವವುಳ್ಳವನು ಅಧಮ ಶ್ರೋತೃ ಎಂದು ಜ್ಞಾನಿಗಳು
ಹೇಳುವರು.
ದರ್ಪಣ, ತಕ್ಕಡಿ, ದಂಡ, ಒರೆಗಲ್ಲು ಇವುಗಳಿಗೆ ಸಮಾನರಾದ ಶ್ರೋತೃಗಳು ರತ್ನಗಳನ್ನು
ಪರೀಕ್ಷೆಮಾಡುವುದಕ್ಕೆ ಅಧಿಕಾರಿಗಳು.
ಶ್ರೋತೃವು ಕಥಾಶ್ರವಣದಿಂದ ಲೌಕಿಕ ಫಲವನ್ನು ನಿರೀಕ್ಷಿಸಬಾರದು. ಕಥೆಯನ್ನು
ಹೇಳುವವನು ಶ್ರೋತೃಗಳಿಂದ ಸತ್ಕಾರವನ್ನೂ ಹಣವನ್ನೂ ಮೊದಲಾದ ಯಾವ
ಪ್ರತಿಫಲವನ್ನೂ ನಿರೀಕ್ಷಿಸಕೂಡದು.
ಶ್ರೋತೃವು ಧರ್ಮಕಥೆಯನ್ನು ಕೇಳಲು ಇಚ್ಛಿಸುವ ಗುಣದಿಂದ ಪ್ರಶಂಸಿಸಲ್ಪಡುತ್ತಾನೆ.
ಕಥೆಯನ್ನು ಹೇಳುವವನು ವಾತ್ಸಲ್ಯಾದಿ ಗುಣಗಳಿಂದ ಭೂಷಿತನಾಗಿರಬೇಕು
ಶ್ರೋತೃವಿಗೆ ಸತ್ಕಥೆಯನ್ನು ಕೇಳುವುದರಿಂದ ಉಂಟಾಗುವ ಪುಣ್ಯದಿಂದ ಸಾಂಸಾರಿಕ
ಸುಖದೊಡನೆ ಮೋಕ್ಷಸುಖವೂ ದೊರಕುವುದು.
ಸುಖದೊಡನೆ ಮೋಕ್ಷಸುಖವೂ ದೊರಕುವುದು.
ಮೂಲ : ಮಹಾಪುರಾಣ
No comments:
Post a Comment